ಸಿಂಪಲ್ ಆಗಿ ಒಂದು ಊರು ಸ್ಟೋರಿ !! ( ಭಾಗ ೧ )
ಬರೆಯುವ ಮುನ್ನ
ಸ್ನೇಹಿತರೆ, ಈ ಬರವಣಿಗೆಯಲ್ಲಿ ನಾನು ಸಿಂಪಲ್ ಕನ್ನಡ , ಎಲಾರ್ಗೂ ಓದಿ ಅರ್ಥ ಮಾಡ್ಕೊಳೋಕೆ ಈಸೀ ಆಗೋ ಥರ ಬರ್ದಿದೀನಿ . ಬೆಂಗಳೂರು ಸ್ನೇಹಿತರು ಜಾಸ್ತಿ ಇರುವುದರಿಂದ ಹೀಗೆ ಬರೆಯಲೇ ಬೇಕಾಗಿದೆ. ನಮ್ಮ ಊರಿನ ಬಗ್ಗೆ ಒಂದು ಚಿಕ್ಕ ಐಡಿಯಾ ಕೊಡುವ ಪ್ರಯತ್ನ ಮಾಡಿದೀನಿ . ಇದು ಮೊದಲನೇ ಭಾಗ .
ಧನ್ಯವಾದ
"ಜಯಪುರ ಜಯಪುರ" ಅನ್ನೋ ಕರ್ಕಶ ಕೂಗೊಂದು ಐರಾವತದ ತಂಪಾದ ಏಸೀನಲ್ಲಿ ಬ್ಲ್ಯಾಂಕೆಟ್ ಹೊದ್ದು ಕಾಲು ಚಾಚಿ ಮಲಗಿದ್ದ ನನ್ನ ಬಡಿದೆಬ್ಬಿಸ್ತು . ಮೊಬೈಲ್ ತೆಗೆದು ನೋಡಿದ್ರೆ ಇನ್ನೂ ಬೆಳಿಗ್ಗೆ 5 ಘಂಟೆ . ಇಷ್ಟು ಬೇಗ ರೀಚ್ ಆದ್ನ ಅಂತ ಡ್ರೈವರ್ ನ ಮನಸಾರೆ ಬೈದುಕೊಂಡು ಕಣ್ಣು ಉಜ್ಜಿಕೊಂಡೆ.
ನಾನು ಇಳಿಬೇಕಾದ ಜಾಗ ಇನ್ನೂ 10 ಕಿ ಮೀ ಇದೆ. ಚಿಕ್ಕಮಗಳೂರಿಂದ ನಿದ್ರಾದೇವಿ ಆವರಿಸೋಕೆ ಟ್ರೈ ಮಾಡುದ್ರೂನೂ ನಮ್ಮ ರೋಡು , ಆ ಟರ್ನಿಂಗ್ಗಳು ಮತ್ತೆ ಬಸ್ ಡ್ರೈವರ್ ಒಟ್ತ್ಗೆ ಸೇರಿ ಅವಳನ್ನ ಓಡಿಸ್ತಾ ಇದ್ರು .
ಅರೆ ಕೆಂಪಾದ ನನ್ನ ಕಣ್ಣುಗಳನ್ನ ತೆರೆದು ಕಪ್ಪಾದ ವಿಂಡೊ ಗ್ಲಾಸ್ ನಿಂದ ಆಚೆ ನೋಡೋಕೆ ಟ್ರೈ ಮಾಡ್ತಾ ಇದ್ದೆ . ಅದೇ ಊರು ಯಾವ್ದೇ ರೀತಿ ಆದ ಮೇಜರ್ ಚೇಂಜಸ್ ನನಗೆ ಕಾಣಿಸ್ತಾ ಇರ್ಲಿಲ್ಲ . ಅಲ್ಲಿ ಇಲ್ಲಿ ಒಂದೊಂದು ಹೊಸ ಬಿಲ್ಡಿಂಗ್ ಬಿಟ್ರೆ ಯಾವುದೇ ರೆವೊಲ್ಯೂಶನರೀ ಚೇಂಜಸ್ ಇಲ್ಲ. ಹಾಗೆ ಕಣ್ಣು ಹಾಯಿಸಿದಾಗ ಕಾನ್ಸಿದ್ದು ಆ ಕಾಲದ ಫೇಮಸ್ ಹಾಗೂ ನಮ್ಮ ಫವೊಊರಿಟ್ ಹೇರ್ ಕಟ್ ಶಾಪ್ . ಬೆಳಿಗ್ಗೆ 6 ಘಂಟೆಗೆ ಎದ್ದು 4 ಕಿ ಮೀ ನೆಡೆದು , ಬಸ್ ಹಿಡ್ಕೊಂಡು ಅಲ್ಲಿಗೆ ಬಂದು , ಬೇರೆ ಬೇರೆ ಸ್ಟೈಲ್ ಮಾಡೋಕೆ ಅವನ ತಲೆ ತಿಂದು ಹೋಗ್ತಾ ಇದ್ವಿ . ಎಷ್ಟೇ ತಲೆ ತಿಂದ್ರುನೂ ಆತ ಅದನ್ನ ಮನಸ್ಸಿಗೆ ಹಕ್ಕೊಲ್ದೇ ಅವನಿಗೆ ಗೊತ್ತಿದ್ದ ಒಂದು ಹೇರ್ ಕಟ್ ನಾ ಎಲ್ಲರ್ಗೂ ಮಾಡಿ , ಅವರನ್ನ ಖುಷಿಯಾಗಿ ಮನೆಗೆ ಕಳಿಸ್ತಾ ಇದ್ದ ಅವನ ಕ್ಲೆವರ್ನೆಸ್ ನಾ ಮನಸ್ಸಿನೆಲ್ಲೆ ನೆನೆಸಿಕೊಂಡು ನಗ್ತಾ ಇದ್ದೇ.
ಹಾಗೆ ನಿದ್ರಿಸುವ ಪ್ರಯಾಣಿಕರನ್ನು ಹೊತ್ತ ನಮ್ಮ ಐರಾವತ ಮುಂದೆ ಸಾಗಲು ಶುರುವಾಯ್ತು. ಆಚೆ ಚಿಕ್ಕದಾಗಿ ಮಳೆ ಬೇರೆ. ಆ ಮಳೆ ನೋಡಿ ಗಾಳಿಪಟ
ಮೂವೀ ನಲ್ಲಿ ರಾಂಘಾಯನ ರಘು ಹೇಳುವ "ಇದೇನು ಊರೋ ಅಥವಾ ಬಚ್ಚಲು ಮನೇನೂ" ಡೈಲಾಗ್ ಮನಸ್ಸಿಗೆ ಬಂತು. ನಮ್ಮೂರಲ್ಲಿ ವರ್ಷಕ್ಕೆ ಆರು ತಿಂಗ್ಳು ಮಳೆ ಗ್ಯಾರೆಂಟೀ . ಕೆಲವು ಸಲ ಹಿಡಿದ ಮಳೆ ಮೂರು ಮೂರು ದಿನ ಆದ್ರೂ ಬಿಡೋದಿಲ್ಲ . ಆದ್ರೂ ತಿಂಡಿಪೋತರಿಗೆ ಮಳೆಗಾಲನೇ ಸರಿ ಬಿಡಿ. ಇದರ ಬಗ್ಗೆ ಆಮೇಲೆ ಹೇಳ್ತೀನಿ. ಹಾಗೆ ಹೊರಟ ಬಸ್ಸು ಮುಂದೆ ಚಲಿಸುತ್ತ ಇತ್ತು ನನ್ನ ಯೋಚನೆಗಳು ಹಿಂದೆ ಹೋಗ್ತಾ ಇತ್ತು . ಪ್ರತಿ ಸಲ ಊರ್ಗೆ ಹೋದ್ರು ಹೀಗೇನೆ
ಬಸ್ ನಲ್ಲಿ ಕೂತು ಹಳೆಯದನ್ನು ಯೋಚಿಸೋದು . ಹಳೇ ಸ್ನೇಹಿತ, ಹಳೆಯ ನೆನಪುಗಳು , ಹಳೆಯ ಹುಡುಗಿ ಯಾವತ್ತೂ ನಿದ್ದೆ ಮಾಡೋಕೆ ಬಿಡೋದಿಲ್ಲವಂತೆ.
ಹಾಗೇ ಸಾಗ್ತಾ ಸಾಗ್ತಾ ನನ್ನ ಕಣ್ಣಿಗೆ ಬಿದ್ದಿದ್ದು ನನ್ನ ಮಿಡ್ಲ್ ಸ್ಕೂಲ್ , ಲಾಲಿ ತಿಂತಾ ಇದ್ದ ಅಂಗಡಿಗಳು , ಗಣೇಶನ ದೇವಸ್ತಾನ , ನಾವು ಬಾಳೆ ಹಣ್ಣು ಕದಿಯುತ್ತಿದ್ದ ಅಂಗಡಿಗಳು ಹೀಗೇ ಯೋಚನೆಗಳು ಸಾಗ್ತಾ ಹೋದ್ವು. ಆಗ ಇಷ್ಟ ಆಗ್ತಾ ಇದ್ದ ಹುಡುಗಿಯರು ಅವರ ಮುಕಗಳು ಎಲ್ಲಾ ನನ್ನಲ್ಲಿ ಒಂದು ಮುಗುಳ್ನಗು ತರುವಲ್ಲಿ ಯಶಸ್ವಿಆದ್ವು . ತುಂಬಾ ಜನ ಆಲ್ರೆಡೀ ಮದುವೆ ಆಗಿದಾರೆ ಕೆಲವ್ರಿಗೆ ಮಕ್ಕಳೂ ಆಗಿವೆ. ಕೆಲವು ಸಲ ಸಿಕ್ಕಿದ್ರೆ "ಯಾಕಮ್ಮ ತುಂಬಾ ಅರ್ಜೆಂಟ್ ಇತ್ತಾ ಸಂಸಾರ ಮಾಡೋಕೆ?? ನಾವು ಮದುವೆಗೆ ಕೇಳೋವರ್ಗೂ ಕಾಯೋಕೆ ಆಗ್ಲಿಲ್ವಾ" ಅಂತ ಕೇಳೋಣ ಅನ್ಸುತ್ತೆ ಆದ್ರೆ ಕೇಳೋಕೆ ಆಗಲ್ಲ .
ಮುಂದೆ ಸಿಕ್ಕಿದ್ದು ಹೈ ಸ್ಕೂಲ್ . ಇದೆ ಜಾಗ ನಮಗೆ ಬೆಂಗಳೂರಿಗೆ ಬರೋಕೆ ಅಡಿಪಾಯ ಹಾಕಿದ್ದು . ಒಳ್ಳೆ ಪರ್ಸೆಂಟೇಜ್ ಬಂದ್ರೆ ಮಾತ್ರ ಬೆಂಗಳೋರಿನಲ್ಲಿ
ಓದೋಕೆ ಆಗೋದು , ಅಲ್ಲಿ ಇರೋವ್ರೆಲ್ಲಾ ತುಂಬಾ ಇಂಟೆಲಿಜೆಂಟ್ ಅನ್ನೋ ನಮ್ಮಣ್ಣನ ಮಾತನ್ನ ತುಂಬಾ ಸೀರೀಯಸ್ ಆಗಿ ತಗೊಂಡು ಓದಿದ್ದೆ ಆವಾಗ .
ಇಲ್ಲಿಗೆ ಬಂದ್ಮೇಲೇನೆ ಗೊತ್ತಾಗಿದ್ದು ಎಲ್ಲಾರ ಮನೆ ದೋಸೆನು ತೂತೇ ಅಂತ . ಶನಿವಾರ ಊಟ ಮಾಡ್ದೇನೆ 5 ಘಂಟೆವರ್ಗೂ ಆಡ್ತಾ ಇದ್ದ ಕ್ರಿಕೆಟ್ ನೆನಪಾಯ್ತು.
ಅದ್ರಲ್ಲೂ ಪಾಲಿಟಿಕ್ಸ್ , ಸ್ಕೂಲ್ ನಲ್ಲಿ ಟೀಚರ್ ಜೊತೆ ಪಾಲಿಟಿಕ್ಸ್ , ಕ್ಲಾಸ್ ಮಾನಿಟರ್ ಆಗೋಕೆ ಪಾಲಿಟಿಕ್ಸ್ ಅಬ್ಬಾ ಈ ಪಾಲಿಟಿಕ್ಸ್ ಯಾವ ಚಿಕ್ಕ ಲೆವೆಲ್ನಲ್ಲೇ ಇರುತ್ತೆ , ಈಗ ಬುದ್ದಿಜೀವಿಗಳು ಮೈಕ್ ಹಿಡ್ಕೊಂಡು ಆಫೀಸ್ ನಲ್ಲಿ , ಅಸೆಂಬ್ಲೀ ನಲ್ಲಿ , ಮಠದಲ್ಲಿ ನೆಡಿಯೋ ಪಾಲಿಟಿಕ್ಸ್ ಬಗ್ಗೆ ಮಾತಾಡ್ತಾರೆ ಆದರೆ ಅದು ಸ್ಕೂಲ್ ನಿಂದಾನೆ ಬಂದಿರುತ್ತೆ ಅನ್ನೋದು ನಗ್ನ ಸತ್ಯ.
ಹೀಗೆ ನನ್ನ ಯೋಚನೆಗಳು ಎಷ್ಟು ಫಾಸ್ಟ್ ಆಗಿ ಹೋಗ್ತಾ ಇದ್ವೋ ಅಷ್ಟೇ ಫಾಸ್ಟ್ ಆಗಿ ನಮ್ಮ ಐರಾವತಾನು ಚಲಿಸುತ್ತ ಇತ್ತು . ನಾನು ನನ್ನ ಯೋಚನಾ ಲಹರಿಯಲ್ಲಿ ಮುಳುಗಿರುವಾಗ್ಲೇ ಬಂತು ನೋಡಿ ನಾನು ಇಳಿಯಬೇಕಾದ ಜಾಗ. ಬೇಗ ಎದ್ದು ನನ್ನ ಬ್ಯಾಗ್ ತಗೊಂಡು ಮುಂದೆ ಓಡಿದೆ. ಅದು ರೆಗ್ಯುಲರ್ ಬಸ್ ಸ್ಟಾಪ್ ಆಗಿದ್ರು ಕೂಡ ರಾತ್ರಿ ಹೊತ್ತು ಬಸ್ ಗಳನ್ನ ಅಲ್ಲಿ ನಿಲ್ಲಿಸೋಲ್ಲ. ಯಾರಾದ್ರೂ ಇಳಿಯುವವರು ಇದ್ರೆ ಮಾತ್ರ . ಹಾಗೆ ಹೋಗಿ ಡ್ರೈವರ್ ಗೆ ನಿಲ್ಲಿಸಲು ಹೇಳಿದ್ರೆ ಆತ ನಾನೇನು ಹುಚ್ಚಾನ ಅಂತ ನೋಡ್ದ. ( ಅವನ ತಪ್ಪಿಲ್ಲ ಬಿಡಿ , ಅಲ್ಲಿ ನಕ್ಷಲ್ ಪ್ರಾಬ್ಲಮ್ ಇರೋದ್ರಿಂದ ಸ್ವಲ್ಪ ಭಯ ಪಡ್ತಾರೆ ) . ಇಲ್ಲ ಇಲ್ಲೇ ಇಳಿತೀನಿ ಕರ್ಕೊಂಡು ಹೋಗೋಕೆ ಬರ್ತಾರೆ ಅಂದಾಗ ನಿಲ್ಲಿಸುವ ಮನಸ್ಸು ಇಲ್ದೆ ಇದ್ರೂನೂ ಕಷ್ಟ ಪಟ್ಟು ಬ್ರೇಕ್ ಮೇಲೆ ಕಾಲಿಟ್ಟ. ಬ್ಯಾಗ್ ನಾ ಹೆಗಲಿಗೆ ಹಾಕ್ಕೊಂಡು , ಸುಖ ಪ್ರಯಾಣ ಕೊಟ್ಟ ಐರಾವತಕ್ಕೆ ಥ್ಯಾಂಕ್ಸ್ ಹೇಳಿ ಕೆಳಗಡೆ ಕಾಲಿಟ್ಟೆ. ಮೊದಲೇ ಆತಂಕದಲ್ಲಿದ್ದ ಡ್ರೈವರ್ ಕೆಳಗೆ ಸೇಫ್ ಆಗಿ ಇಳಿದ್ನೋ
ಇಲ್ವೋ ಅಂತಾನೂ ನೋಡ್ದೆ ಆಕ್ಸೆಲರೇಟರ್ ಮೇಲೆ ಕಾಲು ಇಟ್ಟೆ ಬಿಟ್ಟ. ಮುಖದ ಮೇಲೆ ಹೊಗೆ ಉಗುಳಿ ಅದರ ಗಮ್ಯಸ್ಥಾನ ( ಡೆಸ್ಟಿನೇಶನ್) ಕಡೆ ದೌಡಾಯ್ಸ್ತು ಐರಾವತ.
ನನ್ನ ನೋಡಿ ಖುಷಿ ಆದ ಹಾಗೆ ಅಲ್ಲಿಯವರೆಗೂ ಜಿನುಗುತ್ತಿದ್ದ ಮಳೆರಾಯ ಕೂಡ ಸ್ವಲ್ಪ ದೊಡ್ಡ ಹನಿಗಳನ್ನು ಹಾಕಲು ಶುರು ಮಾಡಿದ. ಚಳಿಗೆ ನಡುಗುತ್ತಿದ್ದ ನನ್ನ ಶರೀರವನ್ನು ಜ್ಯಾಕೆಟ್ ನಲ್ಲಿ ಬಂಧಿಸಿ , ಹೊಗೆ ಬತ್ತಿ ಅಂಟಿಸುವ ಮನಸ್ಸಾದರೂ ಕೂಡ ಅದನ್ನ ಆಮೀಕಿಟ್ಟೂ ಪ್ರಕೃತಿ ಕರೆಯಲ್ಲಿ ತೊಡಗಿದೆ. ಅಲ್ಲಿ ಒಂದು ಬಸ್ ಸ್ಟ್ಯಾಂಡ್ ಹಾಗೂ ಪಕ್ಕದಲ್ಲಿ ಒಂದು ಅಂಗಡಿ( ತೆರೆದಿರುವ ಅಂಗಡಿ ಅಲ್ಲ ಮುಚ್ಚಿರುವ ಅಂಗಡಿ ) ಬಿಟ್ಟರೆ ಇನ್ನೇನು ಇಲ್ಲ. ಒಂದು ಬೀದಿ ದೀಪವು ಗತಿ ಇಲ್ಲದೆ ಇರುವ ಆ ಜಾಗದಲ್ಲಿ ಬೃಹದಾಕಾರದಲ್ಲಿ ಬೆಳೆದಿರುವ ಮರಗಳನ್ನು ಬಿಟ್ಟರೆ ಶಬ್ದ ಮಾಡುವ ಜೀರುಂಡೆಗಳು , ಬಿಬ್ರಿಗಳು ಇವೆಯಸ್ಟೆ . ಆ ಕಾರ್ಗತ್ತಲಲ್ಲಿ
ಒಂಟಿ ಪಿಶಾಚಿಯಂತೆ ನಿಂತಿದ್ದ ನನಗೆ ಚಿಕ್ಕ ವಯಸ್ಸಿನಲ್ಲಿ ಇಲ್ಲಿ ದೆವ್ವ ಭೂತ ಇದೆ ಎನ್ನುವ ಮಾತುಗಳು ನೆನಪಾಗಿ ಸುತ್ತ ಮುತ್ತ ನೋಡಲು ಶುರು ಮಾಡಿದೆ.
ನನ್ನ ದುರದೃಷ್ಟಕ್ಕೆ ಕಂಪನೀ ಕೊಡಲು ಒಂದು ದೆವ್ವವು ಇರಲ್ಲಿಲ . ಅವುಗಳು ಕೂಡ ಚಳಿ ಮತ್ತು ಮಳೆಗೆ ಬೆದರಿ ಗೂಡು ಸೇರಿಕೊಂಡಿರಬೇಕು ಎಂದುಕೊಂಡೆ.
ನನ್ನ ಕರೆದುಕೊಂಡು ಹೋಗಲು ಬರಬೇಕಾಗಿದ್ದ ಕಸಿನ್ ಬ್ರದರ್ ಇನ್ನೂ ಬಂದಿರ್ಲಿಲ್ಲ. ಪಾಪ ಮಳೆ ಬೇರೆ , ಅವ್ನಿಗೆ ಮದುವೆ ಬೇರೆ ಆಗಿದೆ ಬೆಳಿಗ್ಗೆ ಮುಂಚೆ ಚಳಿಯಲ್ಲಿ ಅವ್ನ ಹೆಂಡ್ತೀನ ಬಿಟ್ಟು ಬರ್ತಾನೆ ಅಂತ ಎಕ್ಸ್ಪೆಕ್ಟ್ ಮಾಡೋದು ತಪ್ಪು ಅಂತ ಅಂದ್ಕೊಂಡು ಮನೆ ಕಡೆ ಹೆಜ್ಜೆ ಹಾಕೂಕೇ ಶುರು ಮಾಡಿದೆ. ಆದ್ರೂ ನೆಡೆಯಬೇಕಿದ್ದ 4 ಕಿ ಮೀ ಡಿಸ್ಟೆನ್ಸ್ ನನ್ನ ಕಾಡ್ತಾ ಇತ್ತು.
ಸ ಶೇ ಷ ( ಟು ಬಿ ಕಂಟಿನ್ಯೂಡ್ )
ಬರೆಯುವ ಮುನ್ನ
ಸ್ನೇಹಿತರೆ, ಈ ಬರವಣಿಗೆಯಲ್ಲಿ ನಾನು ಸಿಂಪಲ್ ಕನ್ನಡ , ಎಲಾರ್ಗೂ ಓದಿ ಅರ್ಥ ಮಾಡ್ಕೊಳೋಕೆ ಈಸೀ ಆಗೋ ಥರ ಬರ್ದಿದೀನಿ . ಬೆಂಗಳೂರು ಸ್ನೇಹಿತರು ಜಾಸ್ತಿ ಇರುವುದರಿಂದ ಹೀಗೆ ಬರೆಯಲೇ ಬೇಕಾಗಿದೆ. ನಮ್ಮ ಊರಿನ ಬಗ್ಗೆ ಒಂದು ಚಿಕ್ಕ ಐಡಿಯಾ ಕೊಡುವ ಪ್ರಯತ್ನ ಮಾಡಿದೀನಿ . ಇದು ಮೊದಲನೇ ಭಾಗ .
ಧನ್ಯವಾದ
"ಜಯಪುರ ಜಯಪುರ" ಅನ್ನೋ ಕರ್ಕಶ ಕೂಗೊಂದು ಐರಾವತದ ತಂಪಾದ ಏಸೀನಲ್ಲಿ ಬ್ಲ್ಯಾಂಕೆಟ್ ಹೊದ್ದು ಕಾಲು ಚಾಚಿ ಮಲಗಿದ್ದ ನನ್ನ ಬಡಿದೆಬ್ಬಿಸ್ತು . ಮೊಬೈಲ್ ತೆಗೆದು ನೋಡಿದ್ರೆ ಇನ್ನೂ ಬೆಳಿಗ್ಗೆ 5 ಘಂಟೆ . ಇಷ್ಟು ಬೇಗ ರೀಚ್ ಆದ್ನ ಅಂತ ಡ್ರೈವರ್ ನ ಮನಸಾರೆ ಬೈದುಕೊಂಡು ಕಣ್ಣು ಉಜ್ಜಿಕೊಂಡೆ.
ನಾನು ಇಳಿಬೇಕಾದ ಜಾಗ ಇನ್ನೂ 10 ಕಿ ಮೀ ಇದೆ. ಚಿಕ್ಕಮಗಳೂರಿಂದ ನಿದ್ರಾದೇವಿ ಆವರಿಸೋಕೆ ಟ್ರೈ ಮಾಡುದ್ರೂನೂ ನಮ್ಮ ರೋಡು , ಆ ಟರ್ನಿಂಗ್ಗಳು ಮತ್ತೆ ಬಸ್ ಡ್ರೈವರ್ ಒಟ್ತ್ಗೆ ಸೇರಿ ಅವಳನ್ನ ಓಡಿಸ್ತಾ ಇದ್ರು .
ಅರೆ ಕೆಂಪಾದ ನನ್ನ ಕಣ್ಣುಗಳನ್ನ ತೆರೆದು ಕಪ್ಪಾದ ವಿಂಡೊ ಗ್ಲಾಸ್ ನಿಂದ ಆಚೆ ನೋಡೋಕೆ ಟ್ರೈ ಮಾಡ್ತಾ ಇದ್ದೆ . ಅದೇ ಊರು ಯಾವ್ದೇ ರೀತಿ ಆದ ಮೇಜರ್ ಚೇಂಜಸ್ ನನಗೆ ಕಾಣಿಸ್ತಾ ಇರ್ಲಿಲ್ಲ . ಅಲ್ಲಿ ಇಲ್ಲಿ ಒಂದೊಂದು ಹೊಸ ಬಿಲ್ಡಿಂಗ್ ಬಿಟ್ರೆ ಯಾವುದೇ ರೆವೊಲ್ಯೂಶನರೀ ಚೇಂಜಸ್ ಇಲ್ಲ. ಹಾಗೆ ಕಣ್ಣು ಹಾಯಿಸಿದಾಗ ಕಾನ್ಸಿದ್ದು ಆ ಕಾಲದ ಫೇಮಸ್ ಹಾಗೂ ನಮ್ಮ ಫವೊಊರಿಟ್ ಹೇರ್ ಕಟ್ ಶಾಪ್ . ಬೆಳಿಗ್ಗೆ 6 ಘಂಟೆಗೆ ಎದ್ದು 4 ಕಿ ಮೀ ನೆಡೆದು , ಬಸ್ ಹಿಡ್ಕೊಂಡು ಅಲ್ಲಿಗೆ ಬಂದು , ಬೇರೆ ಬೇರೆ ಸ್ಟೈಲ್ ಮಾಡೋಕೆ ಅವನ ತಲೆ ತಿಂದು ಹೋಗ್ತಾ ಇದ್ವಿ . ಎಷ್ಟೇ ತಲೆ ತಿಂದ್ರುನೂ ಆತ ಅದನ್ನ ಮನಸ್ಸಿಗೆ ಹಕ್ಕೊಲ್ದೇ ಅವನಿಗೆ ಗೊತ್ತಿದ್ದ ಒಂದು ಹೇರ್ ಕಟ್ ನಾ ಎಲ್ಲರ್ಗೂ ಮಾಡಿ , ಅವರನ್ನ ಖುಷಿಯಾಗಿ ಮನೆಗೆ ಕಳಿಸ್ತಾ ಇದ್ದ ಅವನ ಕ್ಲೆವರ್ನೆಸ್ ನಾ ಮನಸ್ಸಿನೆಲ್ಲೆ ನೆನೆಸಿಕೊಂಡು ನಗ್ತಾ ಇದ್ದೇ.
ಹಾಗೆ ನಿದ್ರಿಸುವ ಪ್ರಯಾಣಿಕರನ್ನು ಹೊತ್ತ ನಮ್ಮ ಐರಾವತ ಮುಂದೆ ಸಾಗಲು ಶುರುವಾಯ್ತು. ಆಚೆ ಚಿಕ್ಕದಾಗಿ ಮಳೆ ಬೇರೆ. ಆ ಮಳೆ ನೋಡಿ ಗಾಳಿಪಟ
ಮೂವೀ ನಲ್ಲಿ ರಾಂಘಾಯನ ರಘು ಹೇಳುವ "ಇದೇನು ಊರೋ ಅಥವಾ ಬಚ್ಚಲು ಮನೇನೂ" ಡೈಲಾಗ್ ಮನಸ್ಸಿಗೆ ಬಂತು. ನಮ್ಮೂರಲ್ಲಿ ವರ್ಷಕ್ಕೆ ಆರು ತಿಂಗ್ಳು ಮಳೆ ಗ್ಯಾರೆಂಟೀ . ಕೆಲವು ಸಲ ಹಿಡಿದ ಮಳೆ ಮೂರು ಮೂರು ದಿನ ಆದ್ರೂ ಬಿಡೋದಿಲ್ಲ . ಆದ್ರೂ ತಿಂಡಿಪೋತರಿಗೆ ಮಳೆಗಾಲನೇ ಸರಿ ಬಿಡಿ. ಇದರ ಬಗ್ಗೆ ಆಮೇಲೆ ಹೇಳ್ತೀನಿ. ಹಾಗೆ ಹೊರಟ ಬಸ್ಸು ಮುಂದೆ ಚಲಿಸುತ್ತ ಇತ್ತು ನನ್ನ ಯೋಚನೆಗಳು ಹಿಂದೆ ಹೋಗ್ತಾ ಇತ್ತು . ಪ್ರತಿ ಸಲ ಊರ್ಗೆ ಹೋದ್ರು ಹೀಗೇನೆ
ಬಸ್ ನಲ್ಲಿ ಕೂತು ಹಳೆಯದನ್ನು ಯೋಚಿಸೋದು . ಹಳೇ ಸ್ನೇಹಿತ, ಹಳೆಯ ನೆನಪುಗಳು , ಹಳೆಯ ಹುಡುಗಿ ಯಾವತ್ತೂ ನಿದ್ದೆ ಮಾಡೋಕೆ ಬಿಡೋದಿಲ್ಲವಂತೆ.
ಹಾಗೇ ಸಾಗ್ತಾ ಸಾಗ್ತಾ ನನ್ನ ಕಣ್ಣಿಗೆ ಬಿದ್ದಿದ್ದು ನನ್ನ ಮಿಡ್ಲ್ ಸ್ಕೂಲ್ , ಲಾಲಿ ತಿಂತಾ ಇದ್ದ ಅಂಗಡಿಗಳು , ಗಣೇಶನ ದೇವಸ್ತಾನ , ನಾವು ಬಾಳೆ ಹಣ್ಣು ಕದಿಯುತ್ತಿದ್ದ ಅಂಗಡಿಗಳು ಹೀಗೇ ಯೋಚನೆಗಳು ಸಾಗ್ತಾ ಹೋದ್ವು. ಆಗ ಇಷ್ಟ ಆಗ್ತಾ ಇದ್ದ ಹುಡುಗಿಯರು ಅವರ ಮುಕಗಳು ಎಲ್ಲಾ ನನ್ನಲ್ಲಿ ಒಂದು ಮುಗುಳ್ನಗು ತರುವಲ್ಲಿ ಯಶಸ್ವಿಆದ್ವು . ತುಂಬಾ ಜನ ಆಲ್ರೆಡೀ ಮದುವೆ ಆಗಿದಾರೆ ಕೆಲವ್ರಿಗೆ ಮಕ್ಕಳೂ ಆಗಿವೆ. ಕೆಲವು ಸಲ ಸಿಕ್ಕಿದ್ರೆ "ಯಾಕಮ್ಮ ತುಂಬಾ ಅರ್ಜೆಂಟ್ ಇತ್ತಾ ಸಂಸಾರ ಮಾಡೋಕೆ?? ನಾವು ಮದುವೆಗೆ ಕೇಳೋವರ್ಗೂ ಕಾಯೋಕೆ ಆಗ್ಲಿಲ್ವಾ" ಅಂತ ಕೇಳೋಣ ಅನ್ಸುತ್ತೆ ಆದ್ರೆ ಕೇಳೋಕೆ ಆಗಲ್ಲ .
ಮುಂದೆ ಸಿಕ್ಕಿದ್ದು ಹೈ ಸ್ಕೂಲ್ . ಇದೆ ಜಾಗ ನಮಗೆ ಬೆಂಗಳೂರಿಗೆ ಬರೋಕೆ ಅಡಿಪಾಯ ಹಾಕಿದ್ದು . ಒಳ್ಳೆ ಪರ್ಸೆಂಟೇಜ್ ಬಂದ್ರೆ ಮಾತ್ರ ಬೆಂಗಳೋರಿನಲ್ಲಿ
ಓದೋಕೆ ಆಗೋದು , ಅಲ್ಲಿ ಇರೋವ್ರೆಲ್ಲಾ ತುಂಬಾ ಇಂಟೆಲಿಜೆಂಟ್ ಅನ್ನೋ ನಮ್ಮಣ್ಣನ ಮಾತನ್ನ ತುಂಬಾ ಸೀರೀಯಸ್ ಆಗಿ ತಗೊಂಡು ಓದಿದ್ದೆ ಆವಾಗ .
ಇಲ್ಲಿಗೆ ಬಂದ್ಮೇಲೇನೆ ಗೊತ್ತಾಗಿದ್ದು ಎಲ್ಲಾರ ಮನೆ ದೋಸೆನು ತೂತೇ ಅಂತ . ಶನಿವಾರ ಊಟ ಮಾಡ್ದೇನೆ 5 ಘಂಟೆವರ್ಗೂ ಆಡ್ತಾ ಇದ್ದ ಕ್ರಿಕೆಟ್ ನೆನಪಾಯ್ತು.
ಅದ್ರಲ್ಲೂ ಪಾಲಿಟಿಕ್ಸ್ , ಸ್ಕೂಲ್ ನಲ್ಲಿ ಟೀಚರ್ ಜೊತೆ ಪಾಲಿಟಿಕ್ಸ್ , ಕ್ಲಾಸ್ ಮಾನಿಟರ್ ಆಗೋಕೆ ಪಾಲಿಟಿಕ್ಸ್ ಅಬ್ಬಾ ಈ ಪಾಲಿಟಿಕ್ಸ್ ಯಾವ ಚಿಕ್ಕ ಲೆವೆಲ್ನಲ್ಲೇ ಇರುತ್ತೆ , ಈಗ ಬುದ್ದಿಜೀವಿಗಳು ಮೈಕ್ ಹಿಡ್ಕೊಂಡು ಆಫೀಸ್ ನಲ್ಲಿ , ಅಸೆಂಬ್ಲೀ ನಲ್ಲಿ , ಮಠದಲ್ಲಿ ನೆಡಿಯೋ ಪಾಲಿಟಿಕ್ಸ್ ಬಗ್ಗೆ ಮಾತಾಡ್ತಾರೆ ಆದರೆ ಅದು ಸ್ಕೂಲ್ ನಿಂದಾನೆ ಬಂದಿರುತ್ತೆ ಅನ್ನೋದು ನಗ್ನ ಸತ್ಯ.
ಹೀಗೆ ನನ್ನ ಯೋಚನೆಗಳು ಎಷ್ಟು ಫಾಸ್ಟ್ ಆಗಿ ಹೋಗ್ತಾ ಇದ್ವೋ ಅಷ್ಟೇ ಫಾಸ್ಟ್ ಆಗಿ ನಮ್ಮ ಐರಾವತಾನು ಚಲಿಸುತ್ತ ಇತ್ತು . ನಾನು ನನ್ನ ಯೋಚನಾ ಲಹರಿಯಲ್ಲಿ ಮುಳುಗಿರುವಾಗ್ಲೇ ಬಂತು ನೋಡಿ ನಾನು ಇಳಿಯಬೇಕಾದ ಜಾಗ. ಬೇಗ ಎದ್ದು ನನ್ನ ಬ್ಯಾಗ್ ತಗೊಂಡು ಮುಂದೆ ಓಡಿದೆ. ಅದು ರೆಗ್ಯುಲರ್ ಬಸ್ ಸ್ಟಾಪ್ ಆಗಿದ್ರು ಕೂಡ ರಾತ್ರಿ ಹೊತ್ತು ಬಸ್ ಗಳನ್ನ ಅಲ್ಲಿ ನಿಲ್ಲಿಸೋಲ್ಲ. ಯಾರಾದ್ರೂ ಇಳಿಯುವವರು ಇದ್ರೆ ಮಾತ್ರ . ಹಾಗೆ ಹೋಗಿ ಡ್ರೈವರ್ ಗೆ ನಿಲ್ಲಿಸಲು ಹೇಳಿದ್ರೆ ಆತ ನಾನೇನು ಹುಚ್ಚಾನ ಅಂತ ನೋಡ್ದ. ( ಅವನ ತಪ್ಪಿಲ್ಲ ಬಿಡಿ , ಅಲ್ಲಿ ನಕ್ಷಲ್ ಪ್ರಾಬ್ಲಮ್ ಇರೋದ್ರಿಂದ ಸ್ವಲ್ಪ ಭಯ ಪಡ್ತಾರೆ ) . ಇಲ್ಲ ಇಲ್ಲೇ ಇಳಿತೀನಿ ಕರ್ಕೊಂಡು ಹೋಗೋಕೆ ಬರ್ತಾರೆ ಅಂದಾಗ ನಿಲ್ಲಿಸುವ ಮನಸ್ಸು ಇಲ್ದೆ ಇದ್ರೂನೂ ಕಷ್ಟ ಪಟ್ಟು ಬ್ರೇಕ್ ಮೇಲೆ ಕಾಲಿಟ್ಟ. ಬ್ಯಾಗ್ ನಾ ಹೆಗಲಿಗೆ ಹಾಕ್ಕೊಂಡು , ಸುಖ ಪ್ರಯಾಣ ಕೊಟ್ಟ ಐರಾವತಕ್ಕೆ ಥ್ಯಾಂಕ್ಸ್ ಹೇಳಿ ಕೆಳಗಡೆ ಕಾಲಿಟ್ಟೆ. ಮೊದಲೇ ಆತಂಕದಲ್ಲಿದ್ದ ಡ್ರೈವರ್ ಕೆಳಗೆ ಸೇಫ್ ಆಗಿ ಇಳಿದ್ನೋ
ಇಲ್ವೋ ಅಂತಾನೂ ನೋಡ್ದೆ ಆಕ್ಸೆಲರೇಟರ್ ಮೇಲೆ ಕಾಲು ಇಟ್ಟೆ ಬಿಟ್ಟ. ಮುಖದ ಮೇಲೆ ಹೊಗೆ ಉಗುಳಿ ಅದರ ಗಮ್ಯಸ್ಥಾನ ( ಡೆಸ್ಟಿನೇಶನ್) ಕಡೆ ದೌಡಾಯ್ಸ್ತು ಐರಾವತ.
ನನ್ನ ನೋಡಿ ಖುಷಿ ಆದ ಹಾಗೆ ಅಲ್ಲಿಯವರೆಗೂ ಜಿನುಗುತ್ತಿದ್ದ ಮಳೆರಾಯ ಕೂಡ ಸ್ವಲ್ಪ ದೊಡ್ಡ ಹನಿಗಳನ್ನು ಹಾಕಲು ಶುರು ಮಾಡಿದ. ಚಳಿಗೆ ನಡುಗುತ್ತಿದ್ದ ನನ್ನ ಶರೀರವನ್ನು ಜ್ಯಾಕೆಟ್ ನಲ್ಲಿ ಬಂಧಿಸಿ , ಹೊಗೆ ಬತ್ತಿ ಅಂಟಿಸುವ ಮನಸ್ಸಾದರೂ ಕೂಡ ಅದನ್ನ ಆಮೀಕಿಟ್ಟೂ ಪ್ರಕೃತಿ ಕರೆಯಲ್ಲಿ ತೊಡಗಿದೆ. ಅಲ್ಲಿ ಒಂದು ಬಸ್ ಸ್ಟ್ಯಾಂಡ್ ಹಾಗೂ ಪಕ್ಕದಲ್ಲಿ ಒಂದು ಅಂಗಡಿ( ತೆರೆದಿರುವ ಅಂಗಡಿ ಅಲ್ಲ ಮುಚ್ಚಿರುವ ಅಂಗಡಿ ) ಬಿಟ್ಟರೆ ಇನ್ನೇನು ಇಲ್ಲ. ಒಂದು ಬೀದಿ ದೀಪವು ಗತಿ ಇಲ್ಲದೆ ಇರುವ ಆ ಜಾಗದಲ್ಲಿ ಬೃಹದಾಕಾರದಲ್ಲಿ ಬೆಳೆದಿರುವ ಮರಗಳನ್ನು ಬಿಟ್ಟರೆ ಶಬ್ದ ಮಾಡುವ ಜೀರುಂಡೆಗಳು , ಬಿಬ್ರಿಗಳು ಇವೆಯಸ್ಟೆ . ಆ ಕಾರ್ಗತ್ತಲಲ್ಲಿ
ಒಂಟಿ ಪಿಶಾಚಿಯಂತೆ ನಿಂತಿದ್ದ ನನಗೆ ಚಿಕ್ಕ ವಯಸ್ಸಿನಲ್ಲಿ ಇಲ್ಲಿ ದೆವ್ವ ಭೂತ ಇದೆ ಎನ್ನುವ ಮಾತುಗಳು ನೆನಪಾಗಿ ಸುತ್ತ ಮುತ್ತ ನೋಡಲು ಶುರು ಮಾಡಿದೆ.
ನನ್ನ ದುರದೃಷ್ಟಕ್ಕೆ ಕಂಪನೀ ಕೊಡಲು ಒಂದು ದೆವ್ವವು ಇರಲ್ಲಿಲ . ಅವುಗಳು ಕೂಡ ಚಳಿ ಮತ್ತು ಮಳೆಗೆ ಬೆದರಿ ಗೂಡು ಸೇರಿಕೊಂಡಿರಬೇಕು ಎಂದುಕೊಂಡೆ.
ನನ್ನ ಕರೆದುಕೊಂಡು ಹೋಗಲು ಬರಬೇಕಾಗಿದ್ದ ಕಸಿನ್ ಬ್ರದರ್ ಇನ್ನೂ ಬಂದಿರ್ಲಿಲ್ಲ. ಪಾಪ ಮಳೆ ಬೇರೆ , ಅವ್ನಿಗೆ ಮದುವೆ ಬೇರೆ ಆಗಿದೆ ಬೆಳಿಗ್ಗೆ ಮುಂಚೆ ಚಳಿಯಲ್ಲಿ ಅವ್ನ ಹೆಂಡ್ತೀನ ಬಿಟ್ಟು ಬರ್ತಾನೆ ಅಂತ ಎಕ್ಸ್ಪೆಕ್ಟ್ ಮಾಡೋದು ತಪ್ಪು ಅಂತ ಅಂದ್ಕೊಂಡು ಮನೆ ಕಡೆ ಹೆಜ್ಜೆ ಹಾಕೂಕೇ ಶುರು ಮಾಡಿದೆ. ಆದ್ರೂ ನೆಡೆಯಬೇಕಿದ್ದ 4 ಕಿ ಮೀ ಡಿಸ್ಟೆನ್ಸ್ ನನ್ನ ಕಾಡ್ತಾ ಇತ್ತು.
ಸ ಶೇ ಷ ( ಟು ಬಿ ಕಂಟಿನ್ಯೂಡ್ )
use kannada as much as possible dude. ododakke khushi aagatte. barde iroru kaltkoLli bidu. :)
ReplyDeletehowdu nangu haage ansutte. aadre yella althare . avrige ondu illa yerdu dina beku odi mugsoke. ade problem.
Deleteಚೆನ್ನಾಗಿದೆ ಕಣೋ ಬರೆದಿದ್ದು..
ReplyDeleteಅದೆಷ್ಟು ನಡೀತಿದ್ರೋ ನೀವೆಲ್ಲ ಮಾರಾಯ.. ನೆನೆಸ್ಕೊಂಡ್ರೆ ಹೌದಾ ಅಷ್ಟು ದೂರ ನಡ್ಕೊಂಡು ಹೋಗ್ತಿದ್ದಿದ್ದು ಅನ್ಸುತ್ತೆ...
ಹಾಹಾ ಈಗ ನೆಡಿಯೋಕೆ ಹೇಳು ಆಗುತ್ತಾ ನೋಡೋಣ :P
ReplyDelete