ಹದಿನೆಂಟರ ಹರೆಯಕ್ಕೇ ತುಂಬಾ ಕಷ್ಟಗಳನ್ನ ನೋಡಿದ್ದ ಲಕ್ಷ್ಮೀನಾರಾಯಣನಿಗೆ ಒಂದು ರೀತಿಯ ಆತ್ಮ ಸ್ಥೈರ್ಯ ಬಂದಿತ್ತು. ತನ್ನೆಲ್ಲಾ ಆಸೆಗಳನ್ನ ಮನಸ್ಸಿನಲ್ಲೇ ಬಚ್ಚಿಟ್ಟು ಆರ್ಥಿಕ ಏಳಿಗೆಗಾಗಿ ಹಗಲಿರುಳೂ ಶ್ರಮಿಸಲಾರಂಭಿಸಿದ. ಊರಿನ ಕೆಲವು ಹುಡುಗರು ಇವನಿಗೆ ಆತ್ಮೀಯರಾಗಿದ್ದರು. ಸಮಯವಿದ್ದಾಗ ಹುಡುಗರನ್ನೆಲ್ಲಾ ಸೇರಿಸಿಕೊಂಡು ಕ್ರಿಕೆಟ್ ಆಡುವ ಹುಚ್ಚೊಂದು ಲಕ್ಷ್ಮೀನಾರಾಯಣನಿಗಿತ್ತು. ಇವನೊಡನಿದ್ದ ಹುಡುಗರಲ್ಲಿ ಬ್ರಾಹ್ಮಣರಿಗಿಂತ ಬೇರೆಯವರೇ ಜಾಸ್ತಿ ಇದ್ದರು. ಕೆಲವು ಕುಡಿಯುವ ಸಿಗರೇಟ್ ಸೇದುವ ಹುಡುಗರೂ ಸೇರಿಕೊಂಡಿದ್ದರು. ಅದ್ಯಾಕೋ ಅಪ್ಪನ ಜೀವನದಲ್ಲಿ ಕಂಡಿದ್ದ ಘಟನೆಗಳಿಂದ ಲಕ್ಷ್ಮೀನಾರಾಯಣ ಇವುಗಳ ಕಡೆಗೆ ಆಕರ್ಷಿತನಾಗಿರಲಿಲ್ಲ. ಅವನ ಕಣ್ಣೆದುರಲ್ಲಿ ನೆಡೆದಿರುವ ಘೋರ ಘಟೆನೆಗಳ ಭಯ ಅವನನ್ನ ಕುಡಿತದಿಂದ ದೂರವಿರಿಸಿತ್ತು. ಎಲ್ಲಾ ಬ್ರಾಹ್ಮಣರೂ ಕಳ್ಳರೇ, ಎಲ್ಲಾರು ಕದ್ದು ಮುಚ್ಚಿ ಮಾಂಸ ತಿಂತಾರೆ ಅಂತ ಇವನ ಸ್ನೇಹಿತರು ಉದಾಹರಣೆ ಸಹಿತ ಕೆಲವೊಂದು ಘಟನೆಗಳನ್ನ ಬಿಚ್ಛಿಟ್ಟಾಗ ಲಕ್ಷ್ಮೀನಾರಾಯಣ ದಂಗಾಗಿದ್ದ. ನಾನು ಅಂದುಕೊಂಡ ಸಮಾಜಕ್ಕೂ ವಾಸ್ತವ ಸಮಾಜಕ್ಕೂ ಬಹಳ ವ್ಯತ್ಯಾಸ ಇದೆ ಎಂದು ಅರಿತಾಗ ಲಕ್ಷ್ಮೀನಾರಾಯಣ ನಿಧಾನವಾಗಿ ತನ್ನ ದೃಢನಿರ್ಧಾರಗಳನ್ನ ಸಡಿಲಗೊಳಿಸಿ ಮಾಂಸಾಹಾರಕ್ಕೆ ಕೈ ಇಟ್ಟಿದ್ದ.
ಅದ್ ಹೇಗೋ ಹರಡಿಬಿಟ್ಟಿತ್ತು ಸುದ್ದಿ. ಲಕ್ಷ್ಮೀನಾರಾಯಣ ಮಾಂಸ ತಿಂತಾನಂತೆ ಅನ್ನೋ ಮಾತು ಬ್ರಾಹ್ಮಣ ಕುಟುಂಬಗಳಲ್ಲಿ ಹರಿದಾಡಲಾರಂಬಿಸಿತು. ಮೊದಲೇ ಜಾತಿಯಿಂದ ಅರ್ಧ ಹೊರಗೆ ಇಟ್ಟಿದ್ದ ಜನ ಈಗ ಅವನನ್ನು ಜಾತಿ ಬ್ರಷ್ಟನಂತೆ ಕಾಣಲಾರಂಬಿಸಿದರು. ಅಪ್ಪನಂತೆ ಮಗನೂ ಕೆಟ್ಟ ಎಂಬ ಮಾತುಗಳು ಬೇಡವೆಂದರೂ ಇವನ ಕಿವಿಗೆ ಬೀಳಲಾರಂಬಿಸಿತು. ಜೊತೆ ಸೇರುತ್ತಿದ್ದ ಒಂದಿಬ್ಬರು ಬ್ರಾಹ್ಮಣ ಹುಡುಗರಿಗೂ ಇವನ ಜೊತೆ ಸೇರದಂತೆ ತಾಕೀತಾಗಿತ್ತು. ಅವರು ಇವನಿಗಿನ್ನ ಮುಂಚೆಯೇ ಮಾಂಸ ತಿನ್ನುತಿದ್ದರೆಂಬುದು ಬೇರೆ ಪ್ರಶ್ನೆ. ಒಮ್ಮೆ ಎದುರಿಗೆ ಸಿಕ್ಕಿದ್ದ ಜಾನಕಮ್ಮನಿಗೆ ಚೆನ್ನಾಗಿದೀರಾ ಅಂತ ಕೇಳ್ದಾಗ ಅವರು ಇವನಿಗೆ ಉತ್ತರಿಸದೇ ಮುಖ ತಿರುಗಿಸಿಕೊಂಡು ಹೋಗಿದ್ರು. ಅದ್ಯಾಕೆ ಹಾಗೆ ಮುಖ ಮಾಡ್ಕೊಂಡು ಹೋಗ್ತೀರಿ?? ನಿಮ್ಮ ಗಂಡನ ರಾಸಲೀಲೆಗಳನ್ನ ಒಮ್ಮೆ ಕೇಳಿ ಅನ್ನೋವಷ್ಟು ಕೋಪ ಬಂದಿದ್ದರೂ ತನಗೆ ತಾನೇ ಸಮಾಧಾನ ಮಾಡಿಕೊಂಡು ಅಲ್ಲಿಂದ ಮುಂದೆ ನೆಡೆದಿದ್ದ ಲಕ್ಷ್ಮೀನಾರಾಯಣ.
ಮನೆಯಲ್ಲಿ ಅಪ್ಪನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿತ್ತು. ದಿನಕ್ಕೆ ಎರಡರಿಂದ ಮೂರು ಕಟ್ಟು ಬೀಡಿ ಸೇದುತ್ತಿದ್ದ ಅಪ್ಪನಿಗೆ ಹಲ್ಲುನೋವು ಶುರುವಾಗಿ, ಕೀವಾಗಿ ಮುಖವೆಲ್ಲಾ ಬಾತುಕೊಂಡಿತ್ತು. ಆಪರೇಶನ್ ಮಾಡದೆ ಏನೂ ಮಾಡಕಾಗಲ್ಲ ಅಂತ ಡಾಕ್ಟರ್ ಹೇಳ್ದಾಗ ಇವನಿಗೆ ದಿಕ್ಕೇ ತೋಚಿರಲಿಲ್ಲ. ಈಗೀಗ ಸ್ವಲ್ಪ ಕರ್ಚಿಗೆ ಹಣ ಹೊಂದಿಸುವಷ್ಟು ದುಡಿಯುತ್ತಿದ್ದ ಲಕ್ಷ್ಮೀನಾರಾಯಣನಿಗೆ ಅಪ್ಪನ ಆಪರೇಶನ್ ಮಾಡಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ತೋಟದಲ್ಲಿ ನೆಟ್ಟಿದ್ದ ಏಲಕ್ಕಿ ಹಾಗೂ ವೆನಿಲಾ ಗಿಡಗಳು ಇವನ ಆದಾಯ ಹೆಚ್ಚಿಸಲು ಸಹಾಯಾಕಾರಿಯಾಗಿದ್ದರೂ ಕೂಡ ಅವು ಇವನಿಗೆ ಅಪ್ಪನಿಗೆ ಚಿಕಿತ್ಸೆ ಕೊಡಿಸಲಾಗುವಷ್ಟು ಆದಾಯ ಕೊಡುತ್ತಿರಲಿಲ್ಲ. ಕುಡಿತ ನಿಲ್ಲಿಸಿ ಎನ್ನುವ ಡಾಕ್ಟರ್ ಮಾತನ್ನು ಅಪ್ಪ ಕೇಳದೆ ಕುಡಿದು ಕುಡಿದು ಮೂಲ್ವ್ಯಾಧಿ ರೋಗಕ್ಕೆ ಬೇರೆ ತುತ್ಹಾಗಿದ್ದ. ಅತ್ತ ಅಪ್ಪನನ್ನು ಬದುಕಿಸಲೂ ಆಗದೆ ಇತ್ತ ಅವರ ಒದ್ದಾಟವನ್ನು ನೋಡಲೂ ಆಗದೆ ಒಂದು ರೀತಿಯ ಮಾನಸಿಕ ಸಂಧಿಗ್ನತೆಗೆ ಸಿಲುಕ್ಕಿದ್ದ ಲಕ್ಷ್ಮೀನಾರಾಯಣನಿಗೆ ನೆಮ್ಮದಿ ಸಿಗುತ್ತಿದ್ದುದು ಅವನ ಸ್ನೇಹಿತರೊಡನೆ ಮಾತ್ರ.
ಸ್ನೇಹಿತರೊಡನೆ ಹಾಗೂ ಹೀಗೂ ಕಾಲ ಕಳೆಯುತ್ತಿದ್ದ ಲಕ್ಷ್ಮೀನಾರಾಯಣನ ಗುಂಪಿಗೆ ಒಂದು ಹೊಸ ಬ್ರಾಹ್ಮಣ ಹುಡುಗನ ಸೇರ್ಪಡೆ ಆಗಿತ್ತು. ಅನುಕೂಲಾಸ್ತನಾಗಿದ್ದ ನಾಗರಾಜ ಮನೆಗೆ ಒಬ್ಬನೇ ಗಂಡು ಮಗನಾಗಿದ್ದ. ನನ್ನ ಮಗ ಚೆನ್ನಾಗಿ ಓದಬೇಕೆಂಬ ಆಸೆಯಿಂದ ಅವರಪ್ಪ ಅವನನ್ನು ಪೇಟೆಯಲ್ಲಿ ಓದಿಸಿದ್ದರು. ಆದರೆ ನಾಗರಾಜನಿಗೆ ವಿದ್ಯೆ ತಲೆಗೆ ಹತ್ತಲೇ ಇಲ್ಲ. ಚಿಕ್ಕಂದಿನಿಂದಲೂ ಮನೆಯವರ ಭಯ ಇಲ್ಲದೆ ಕೈ ತುಂಬಾ ದುಡ್ಡು ಹಿಡಿದುಕೊಂಡು ಪುಂಡು ಪೋಕರಿಗಳ , ಬೇರೆ ಶ್ರೀಮಂತ ಹುಡುಗರಗಳ ಜೊತೆ ಓಡಾಡುತ್ತಿದ್ದ ನಾಗರಾಜನಿಗೆ ಸರಸ್ವತಿ ಒಲಿದಿರಲಿಲ್ಲ. ಹಾಗೂ ಹೀಗೂ ಕಷ್ಟ ಪಟ್ಟು ಹತ್ತನೇ ತರಗತಿಯಲ್ಲಿ ಪಾಸಾಗಿದ್ದ ನಾಗರಾಜ ಪಿ ಯು ಸಿ ನಲ್ಲಿ ಗೋತಾ ಹೊಡೆದಿದ್ದ. ನಾನು ಇನ್ನು ಓದಲ್ಲಾ ಅಂತ ಹಟ ಹಿಡಿದಿದ್ದ ಅವನನ್ನ ಅವ್ರಪ್ಪ ಬೇರೆ ದಾರಿ ತೋಚದೆ ಸರಿ ಮನೆಗೆ ಬಂದು ಜಮೀನು ನೋಡಿಕೊಂಡಿರು ಅಂತ ಹೇಳಿದ್ದರು. ಪೇಟೆಯಲ್ಲಿ ಇದ್ದ ಹುಡುಗರ ಸಹವಾಸದಿಂದ ಓದೊಂದನ್ನು ಬಿಟ್ಟು ಇನ್ನೆಲ್ಲಾ ವಿದ್ಯೆಗಳಲ್ಲೂ ಪಾರಂಗತನಾಗಿದ್ದ ನಾಗರಾಜ ಹಳ್ಳಿಯಲ್ಲಿ ಎಲ್ಲಾ ಹುಡುಗರಿಗೆ ಮಾರ್ಗದರ್ಶಕನಾಗಿದ್ದ. ದಿನ ಕಳೆದಂತೆ ಲಕ್ಷ್ಮೀನಾರಾಯಣ ಮತ್ತು ನಾಗರಾಜನ ಸ್ನೇಹ ದೃಢವಾಗ್ತಾ ಇತ್ತು.
ಒಂದೆರಡು ತಿಂಗಳಲ್ಲಿ ಇವರ ಸ್ನೇಹ ಬೆಳೆದು ಹೆಮ್ಮರವಾಗಿ ನಿಂತಿತ್ತು. ಲಕ್ಷ್ಮೀನಾರಾಯಣನಿಗೆ ಇದ್ದ ಚುರುಕು ಬುದ್ದಿ ನಾಗರಾಜನಿಗೆ ಹಿಡಿಸಿದರೆ, ಅವನು ಇವನಿಗೆ ಕೊಡುತ್ತಿದ್ದ ಗೌರವ, ಅವನ ಹತ್ತಿರ ಇದ್ದ ಧನಬಲ ಲಕ್ಷ್ಮೀನಾರಾಯಣನನ್ನು ಅವನೆಡೆಗೆ ಸುಲಭವಾಗಿ ಸೆಳೆದುಬಿಟ್ಟಿತ್ತು. ಒಮ್ಮೆ ಹೀಗೆ ಸಂಜೆಯ ತಂಪಾದ ಗಾಳಿಯಲ್ಲಿ ಇಬ್ಬರೂ ಮಾತನಾಡುತ್ತಾ ಕುಳಿತ್ತಿದ್ದಾಗ "ನಿಜ ಹೇಳು ಇಲ್ಲಿಯವರೆಗೂ ಯಾವುದಾದರೂ ಹೆಣ್ಣಿನ ಸವಿ ಕಂಡಿದ್ದೀಯಾ?" ಅಂತ ನಾಗರಾಜ ಕೇಳಿದಾಗ ಏನು ಹೇಳಬೇಕೆಂದು ಲಕ್ಷ್ಮೀನಾರಾಯಣನಿಗೆ ತೋಚಲಿಲ್ಲ. ತನ್ನ ಮನಸ್ಸಿನ ನೋವುಗಳನ್ನು ಹಂಚಿಕೊಳ್ಳಲು, ಮಾತನಾಡಲು ಒಬ್ಬಳು ಗೆಳತಿ ಬೇಕು ಅಂತ ಲಕ್ಷ್ಮೀನಾರಾಯಣನಿಗೆ ಎಷ್ಟೊಂದು ಬಾರಿ ಅನಿಸಿದ್ದರೂ ತನ್ನ ದೇಹ ಸುಖಕ್ಕಾಗಿ ಹೆಣ್ಣೊಂದು ಬೇಕೆಂಬ ಆಲೋಚನೆ ಕೂಡ ಅವನ ಮನಸ್ಸಿನಲ್ಲಿ ಬಂದಿರಲಿಲ್ಲ. ಪ್ರಾಕೃತಿಕವಾಗಿ ಆಗುವ ಭಯಕೆಗಳನ್ನ ಮದುವೆಯ ನಂತರವೇ ಇದೆಲ್ಲಾ ಅಂತ ಅಂದುಕೊಂಡು ಅದುಮಿಡುತ್ತಿದ್ದ ಇವನಿಗೆ ಹಟಾತ್ ಆಗಿ ಬಂದ ಪ್ರಶ್ನೆಗೆ ಏನು ಹೇಳಬೇಕೆಂದು ತಿಳಿಯದೆ ಅದೆಲ್ಲಾ ಮದುವೆಗೆ ಮುಂಚೆ ತಪ್ಪಲ್ವಾ ಅಂತ ಕೇಳಿದ್ದ. ಗೊಳ್ ಅಂತ ನಕ್ಕುಬಿಟ್ಟಿದ್ದ ನಾಗರಾಜ. ನೀನು ನಿಜವಾಗಲೂ ಮುಗ್ಧನ ಅಥವಾ ನನ್ನ ಹತ್ತಿರ ನಾಟಕ ಆಡ್ತಾ ಇದೀಯಾ ಅಂತ ಕೇಳ್ದಾಗ ನಿನಗೇ ಗೊತ್ತು ನಮ್ಮ ಬ್ರಾಹ್ಮಣ ಸಮಾಜದಲ್ಲಿ ಇವೆಲ್ಲಾ ನಿಷಿದ್ದ ಅಂತ ಆದರೂ ಯಾಕೆ ಕೇಳ್ತಾ ಇದೀಯಾ ಅಂದಿದ್ದ ಲಕ್ಷ್ಮೀನಾರಾಯಣ.
ನಿಧಾನವಾಗಿ ಇವನ ಭುಜದ ಮೇಲೆ ಕೈ ಹಾಕಿ "ನಮ್ಮನೆಗೆ ಕೆಲಸಕ್ಕೆ ಬರುವ ನಾಲ್ಕು ಹೆಣ್ಣಾಳುಗಳನ್ನ ನಾನೇ ನೋಡ್ಕೋತಿರೋದು " ಅಂತ ಹೇಳಿ ಮೆಲ್ಲಗೆ ಕಣ್ಣು ಹೊಡೆದಿದ್ದ ನಾಗರಾಜ. ಅಷ್ಟು ಹೇಳಿ ಸುಮ್ಮನಾಗದೆ ಊರಿನಲ್ಲಿ ಯಾರ್ಯಾರ ಕಥೆ ಏನೇನು, ಯಾವ್ ಯಾವ ಗಂಡಸರು ಯಾವ್ ಯಾವ ಹುಡುಗಿಯರನ್ನ ಇಟ್ಟುಕೊಂಡಿದಾರೆ, ಕೆಲವು ಹೆಂಗಸರು ಯಾಕೆ ಒಂದೇ ಮನೆಗೆ ಕೆಲಸಕ್ಕೆ ಹೋಗ್ತಾರೆ ಅಂತೆಲ್ಲಾ ನಾಗರಾಜ ವಿವರಿಸಿ ಹೇಳ್ತಾ ಇದ್ರೆ ಲಕ್ಷ್ಮೀನಾರಾಯಣನಿಗೆ ತಾನು ಸತ್ಯವೆಂದು ಭಾವಿಸಿದ್ದ ಗಾಜಿನ ಸೂರೊಂದು ಒಡೆದು ಮೈ ಮೇಲೆ ಬಿದ್ದಂತೆ ಭಾಸವಾಗುತ್ತಿತ್ತು. ತಾನು ಓದಿದ್ದ ಕೇಳಿದ್ದ ಕಥೆ ಪುರಾಣಗಳು , ನೀತಿ ನಿಯಮಗಳೆಲ್ಲವೂ ಗಾಳಿಯಲ್ಲಿ ತೂರಿಹೋದಂತೆ ಅನಿಸುತ್ತಿತ್ತು. ನನ್ನ ನಂಬಿಕೆಗಳು, ಉದ್ದೇಶಗಳು, ತತ್ವ ಸಿದ್ದಾಂತಗಳೆಲ್ಲಾ ನನಗೊಬ್ಬನಿಗೇ ಮೀಸಲಿರುವ ಚೌಕಟ್ಟೆನಿಸಿಬಿಟ್ಟಿತ್ತು. "ನಿನಗೆ ನಾನು ಹೇಳುವುದರಲ್ಲಿ ನಂಬಿಕೆ ಇಲ್ಲಾ ಅಂದರೆ ನೀನೇ ಸ್ವಲ್ಪ ಗಮನಿಸಿ ನೋಡು. ಪುರುಷ ಪ್ರಕೃತಿಯನ್ನು ಸೇರುವುದು ಸಹಜ ಕ್ರಿಯೆ, ಈ ಮದುವೆ ಬಾಂಧವ್ಯ ಎಲ್ಲಾ ಮನುಷ್ಯ ಮಾಡ್ಕೊಂಡಿರುವ ಕಟ್ಟುಪಾಡುಗಳು. ಇರುವ ಯೌವ್ವನದ ಸಾರ ಸವಿಯೋದು ಬಿಟ್ಟು ಈ ಹಳೇ ತತ್ವ ಸಿದ್ದಾಂತಗಳನ್ನ ಇಟ್ಟುಕೊಂಡು ಏನು ಮಾಡ್ತೀಯಾ?? ಯೋಚನೆ ಮಾಡಿ ನೋಡು" ಅಂತ ಹೇಳಿ ಮನೆಗೆ ನಿರ್ಗಮಿಸಿದ್ದ ನಾಗರಾಜ.
ಯಾಕೋ ನಾಗರಾಜನ ಮಾತುಗಳು ಸ್ವಲ್ಪ ಘಾಡವಾದ ಪರಿಣಾಮ ಬೀರಿದ್ದವು ಲಕ್ಷ್ಮೀನಾರಾಯಣನ ಮೇಲೆ. ಅವನು ಬಲವಂತವಾಗಿ ಕಟ್ಟಿಟ್ಟಿದ್ದ ವಯೋಸಹಜವಾದ ಮನೋಕಾಮನೆಗಳು ಗರಿಗೆದರಿ ನಾಗರಾಜನ ಮಾತಿಗೆ ಹೌದೌದು ಎನ್ನುತ್ತಿದ್ದವು.
ಸ ಶೇ ಷ
ಪ್ರಿಯಾಂಕ್ ರಾವ್
ಅದ್ ಹೇಗೋ ಹರಡಿಬಿಟ್ಟಿತ್ತು ಸುದ್ದಿ. ಲಕ್ಷ್ಮೀನಾರಾಯಣ ಮಾಂಸ ತಿಂತಾನಂತೆ ಅನ್ನೋ ಮಾತು ಬ್ರಾಹ್ಮಣ ಕುಟುಂಬಗಳಲ್ಲಿ ಹರಿದಾಡಲಾರಂಬಿಸಿತು. ಮೊದಲೇ ಜಾತಿಯಿಂದ ಅರ್ಧ ಹೊರಗೆ ಇಟ್ಟಿದ್ದ ಜನ ಈಗ ಅವನನ್ನು ಜಾತಿ ಬ್ರಷ್ಟನಂತೆ ಕಾಣಲಾರಂಬಿಸಿದರು. ಅಪ್ಪನಂತೆ ಮಗನೂ ಕೆಟ್ಟ ಎಂಬ ಮಾತುಗಳು ಬೇಡವೆಂದರೂ ಇವನ ಕಿವಿಗೆ ಬೀಳಲಾರಂಬಿಸಿತು. ಜೊತೆ ಸೇರುತ್ತಿದ್ದ ಒಂದಿಬ್ಬರು ಬ್ರಾಹ್ಮಣ ಹುಡುಗರಿಗೂ ಇವನ ಜೊತೆ ಸೇರದಂತೆ ತಾಕೀತಾಗಿತ್ತು. ಅವರು ಇವನಿಗಿನ್ನ ಮುಂಚೆಯೇ ಮಾಂಸ ತಿನ್ನುತಿದ್ದರೆಂಬುದು ಬೇರೆ ಪ್ರಶ್ನೆ. ಒಮ್ಮೆ ಎದುರಿಗೆ ಸಿಕ್ಕಿದ್ದ ಜಾನಕಮ್ಮನಿಗೆ ಚೆನ್ನಾಗಿದೀರಾ ಅಂತ ಕೇಳ್ದಾಗ ಅವರು ಇವನಿಗೆ ಉತ್ತರಿಸದೇ ಮುಖ ತಿರುಗಿಸಿಕೊಂಡು ಹೋಗಿದ್ರು. ಅದ್ಯಾಕೆ ಹಾಗೆ ಮುಖ ಮಾಡ್ಕೊಂಡು ಹೋಗ್ತೀರಿ?? ನಿಮ್ಮ ಗಂಡನ ರಾಸಲೀಲೆಗಳನ್ನ ಒಮ್ಮೆ ಕೇಳಿ ಅನ್ನೋವಷ್ಟು ಕೋಪ ಬಂದಿದ್ದರೂ ತನಗೆ ತಾನೇ ಸಮಾಧಾನ ಮಾಡಿಕೊಂಡು ಅಲ್ಲಿಂದ ಮುಂದೆ ನೆಡೆದಿದ್ದ ಲಕ್ಷ್ಮೀನಾರಾಯಣ.
ಮನೆಯಲ್ಲಿ ಅಪ್ಪನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿತ್ತು. ದಿನಕ್ಕೆ ಎರಡರಿಂದ ಮೂರು ಕಟ್ಟು ಬೀಡಿ ಸೇದುತ್ತಿದ್ದ ಅಪ್ಪನಿಗೆ ಹಲ್ಲುನೋವು ಶುರುವಾಗಿ, ಕೀವಾಗಿ ಮುಖವೆಲ್ಲಾ ಬಾತುಕೊಂಡಿತ್ತು. ಆಪರೇಶನ್ ಮಾಡದೆ ಏನೂ ಮಾಡಕಾಗಲ್ಲ ಅಂತ ಡಾಕ್ಟರ್ ಹೇಳ್ದಾಗ ಇವನಿಗೆ ದಿಕ್ಕೇ ತೋಚಿರಲಿಲ್ಲ. ಈಗೀಗ ಸ್ವಲ್ಪ ಕರ್ಚಿಗೆ ಹಣ ಹೊಂದಿಸುವಷ್ಟು ದುಡಿಯುತ್ತಿದ್ದ ಲಕ್ಷ್ಮೀನಾರಾಯಣನಿಗೆ ಅಪ್ಪನ ಆಪರೇಶನ್ ಮಾಡಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ತೋಟದಲ್ಲಿ ನೆಟ್ಟಿದ್ದ ಏಲಕ್ಕಿ ಹಾಗೂ ವೆನಿಲಾ ಗಿಡಗಳು ಇವನ ಆದಾಯ ಹೆಚ್ಚಿಸಲು ಸಹಾಯಾಕಾರಿಯಾಗಿದ್ದರೂ ಕೂಡ ಅವು ಇವನಿಗೆ ಅಪ್ಪನಿಗೆ ಚಿಕಿತ್ಸೆ ಕೊಡಿಸಲಾಗುವಷ್ಟು ಆದಾಯ ಕೊಡುತ್ತಿರಲಿಲ್ಲ. ಕುಡಿತ ನಿಲ್ಲಿಸಿ ಎನ್ನುವ ಡಾಕ್ಟರ್ ಮಾತನ್ನು ಅಪ್ಪ ಕೇಳದೆ ಕುಡಿದು ಕುಡಿದು ಮೂಲ್ವ್ಯಾಧಿ ರೋಗಕ್ಕೆ ಬೇರೆ ತುತ್ಹಾಗಿದ್ದ. ಅತ್ತ ಅಪ್ಪನನ್ನು ಬದುಕಿಸಲೂ ಆಗದೆ ಇತ್ತ ಅವರ ಒದ್ದಾಟವನ್ನು ನೋಡಲೂ ಆಗದೆ ಒಂದು ರೀತಿಯ ಮಾನಸಿಕ ಸಂಧಿಗ್ನತೆಗೆ ಸಿಲುಕ್ಕಿದ್ದ ಲಕ್ಷ್ಮೀನಾರಾಯಣನಿಗೆ ನೆಮ್ಮದಿ ಸಿಗುತ್ತಿದ್ದುದು ಅವನ ಸ್ನೇಹಿತರೊಡನೆ ಮಾತ್ರ.
ಸ್ನೇಹಿತರೊಡನೆ ಹಾಗೂ ಹೀಗೂ ಕಾಲ ಕಳೆಯುತ್ತಿದ್ದ ಲಕ್ಷ್ಮೀನಾರಾಯಣನ ಗುಂಪಿಗೆ ಒಂದು ಹೊಸ ಬ್ರಾಹ್ಮಣ ಹುಡುಗನ ಸೇರ್ಪಡೆ ಆಗಿತ್ತು. ಅನುಕೂಲಾಸ್ತನಾಗಿದ್ದ ನಾಗರಾಜ ಮನೆಗೆ ಒಬ್ಬನೇ ಗಂಡು ಮಗನಾಗಿದ್ದ. ನನ್ನ ಮಗ ಚೆನ್ನಾಗಿ ಓದಬೇಕೆಂಬ ಆಸೆಯಿಂದ ಅವರಪ್ಪ ಅವನನ್ನು ಪೇಟೆಯಲ್ಲಿ ಓದಿಸಿದ್ದರು. ಆದರೆ ನಾಗರಾಜನಿಗೆ ವಿದ್ಯೆ ತಲೆಗೆ ಹತ್ತಲೇ ಇಲ್ಲ. ಚಿಕ್ಕಂದಿನಿಂದಲೂ ಮನೆಯವರ ಭಯ ಇಲ್ಲದೆ ಕೈ ತುಂಬಾ ದುಡ್ಡು ಹಿಡಿದುಕೊಂಡು ಪುಂಡು ಪೋಕರಿಗಳ , ಬೇರೆ ಶ್ರೀಮಂತ ಹುಡುಗರಗಳ ಜೊತೆ ಓಡಾಡುತ್ತಿದ್ದ ನಾಗರಾಜನಿಗೆ ಸರಸ್ವತಿ ಒಲಿದಿರಲಿಲ್ಲ. ಹಾಗೂ ಹೀಗೂ ಕಷ್ಟ ಪಟ್ಟು ಹತ್ತನೇ ತರಗತಿಯಲ್ಲಿ ಪಾಸಾಗಿದ್ದ ನಾಗರಾಜ ಪಿ ಯು ಸಿ ನಲ್ಲಿ ಗೋತಾ ಹೊಡೆದಿದ್ದ. ನಾನು ಇನ್ನು ಓದಲ್ಲಾ ಅಂತ ಹಟ ಹಿಡಿದಿದ್ದ ಅವನನ್ನ ಅವ್ರಪ್ಪ ಬೇರೆ ದಾರಿ ತೋಚದೆ ಸರಿ ಮನೆಗೆ ಬಂದು ಜಮೀನು ನೋಡಿಕೊಂಡಿರು ಅಂತ ಹೇಳಿದ್ದರು. ಪೇಟೆಯಲ್ಲಿ ಇದ್ದ ಹುಡುಗರ ಸಹವಾಸದಿಂದ ಓದೊಂದನ್ನು ಬಿಟ್ಟು ಇನ್ನೆಲ್ಲಾ ವಿದ್ಯೆಗಳಲ್ಲೂ ಪಾರಂಗತನಾಗಿದ್ದ ನಾಗರಾಜ ಹಳ್ಳಿಯಲ್ಲಿ ಎಲ್ಲಾ ಹುಡುಗರಿಗೆ ಮಾರ್ಗದರ್ಶಕನಾಗಿದ್ದ. ದಿನ ಕಳೆದಂತೆ ಲಕ್ಷ್ಮೀನಾರಾಯಣ ಮತ್ತು ನಾಗರಾಜನ ಸ್ನೇಹ ದೃಢವಾಗ್ತಾ ಇತ್ತು.
ಒಂದೆರಡು ತಿಂಗಳಲ್ಲಿ ಇವರ ಸ್ನೇಹ ಬೆಳೆದು ಹೆಮ್ಮರವಾಗಿ ನಿಂತಿತ್ತು. ಲಕ್ಷ್ಮೀನಾರಾಯಣನಿಗೆ ಇದ್ದ ಚುರುಕು ಬುದ್ದಿ ನಾಗರಾಜನಿಗೆ ಹಿಡಿಸಿದರೆ, ಅವನು ಇವನಿಗೆ ಕೊಡುತ್ತಿದ್ದ ಗೌರವ, ಅವನ ಹತ್ತಿರ ಇದ್ದ ಧನಬಲ ಲಕ್ಷ್ಮೀನಾರಾಯಣನನ್ನು ಅವನೆಡೆಗೆ ಸುಲಭವಾಗಿ ಸೆಳೆದುಬಿಟ್ಟಿತ್ತು. ಒಮ್ಮೆ ಹೀಗೆ ಸಂಜೆಯ ತಂಪಾದ ಗಾಳಿಯಲ್ಲಿ ಇಬ್ಬರೂ ಮಾತನಾಡುತ್ತಾ ಕುಳಿತ್ತಿದ್ದಾಗ "ನಿಜ ಹೇಳು ಇಲ್ಲಿಯವರೆಗೂ ಯಾವುದಾದರೂ ಹೆಣ್ಣಿನ ಸವಿ ಕಂಡಿದ್ದೀಯಾ?" ಅಂತ ನಾಗರಾಜ ಕೇಳಿದಾಗ ಏನು ಹೇಳಬೇಕೆಂದು ಲಕ್ಷ್ಮೀನಾರಾಯಣನಿಗೆ ತೋಚಲಿಲ್ಲ. ತನ್ನ ಮನಸ್ಸಿನ ನೋವುಗಳನ್ನು ಹಂಚಿಕೊಳ್ಳಲು, ಮಾತನಾಡಲು ಒಬ್ಬಳು ಗೆಳತಿ ಬೇಕು ಅಂತ ಲಕ್ಷ್ಮೀನಾರಾಯಣನಿಗೆ ಎಷ್ಟೊಂದು ಬಾರಿ ಅನಿಸಿದ್ದರೂ ತನ್ನ ದೇಹ ಸುಖಕ್ಕಾಗಿ ಹೆಣ್ಣೊಂದು ಬೇಕೆಂಬ ಆಲೋಚನೆ ಕೂಡ ಅವನ ಮನಸ್ಸಿನಲ್ಲಿ ಬಂದಿರಲಿಲ್ಲ. ಪ್ರಾಕೃತಿಕವಾಗಿ ಆಗುವ ಭಯಕೆಗಳನ್ನ ಮದುವೆಯ ನಂತರವೇ ಇದೆಲ್ಲಾ ಅಂತ ಅಂದುಕೊಂಡು ಅದುಮಿಡುತ್ತಿದ್ದ ಇವನಿಗೆ ಹಟಾತ್ ಆಗಿ ಬಂದ ಪ್ರಶ್ನೆಗೆ ಏನು ಹೇಳಬೇಕೆಂದು ತಿಳಿಯದೆ ಅದೆಲ್ಲಾ ಮದುವೆಗೆ ಮುಂಚೆ ತಪ್ಪಲ್ವಾ ಅಂತ ಕೇಳಿದ್ದ. ಗೊಳ್ ಅಂತ ನಕ್ಕುಬಿಟ್ಟಿದ್ದ ನಾಗರಾಜ. ನೀನು ನಿಜವಾಗಲೂ ಮುಗ್ಧನ ಅಥವಾ ನನ್ನ ಹತ್ತಿರ ನಾಟಕ ಆಡ್ತಾ ಇದೀಯಾ ಅಂತ ಕೇಳ್ದಾಗ ನಿನಗೇ ಗೊತ್ತು ನಮ್ಮ ಬ್ರಾಹ್ಮಣ ಸಮಾಜದಲ್ಲಿ ಇವೆಲ್ಲಾ ನಿಷಿದ್ದ ಅಂತ ಆದರೂ ಯಾಕೆ ಕೇಳ್ತಾ ಇದೀಯಾ ಅಂದಿದ್ದ ಲಕ್ಷ್ಮೀನಾರಾಯಣ.
ನಿಧಾನವಾಗಿ ಇವನ ಭುಜದ ಮೇಲೆ ಕೈ ಹಾಕಿ "ನಮ್ಮನೆಗೆ ಕೆಲಸಕ್ಕೆ ಬರುವ ನಾಲ್ಕು ಹೆಣ್ಣಾಳುಗಳನ್ನ ನಾನೇ ನೋಡ್ಕೋತಿರೋದು " ಅಂತ ಹೇಳಿ ಮೆಲ್ಲಗೆ ಕಣ್ಣು ಹೊಡೆದಿದ್ದ ನಾಗರಾಜ. ಅಷ್ಟು ಹೇಳಿ ಸುಮ್ಮನಾಗದೆ ಊರಿನಲ್ಲಿ ಯಾರ್ಯಾರ ಕಥೆ ಏನೇನು, ಯಾವ್ ಯಾವ ಗಂಡಸರು ಯಾವ್ ಯಾವ ಹುಡುಗಿಯರನ್ನ ಇಟ್ಟುಕೊಂಡಿದಾರೆ, ಕೆಲವು ಹೆಂಗಸರು ಯಾಕೆ ಒಂದೇ ಮನೆಗೆ ಕೆಲಸಕ್ಕೆ ಹೋಗ್ತಾರೆ ಅಂತೆಲ್ಲಾ ನಾಗರಾಜ ವಿವರಿಸಿ ಹೇಳ್ತಾ ಇದ್ರೆ ಲಕ್ಷ್ಮೀನಾರಾಯಣನಿಗೆ ತಾನು ಸತ್ಯವೆಂದು ಭಾವಿಸಿದ್ದ ಗಾಜಿನ ಸೂರೊಂದು ಒಡೆದು ಮೈ ಮೇಲೆ ಬಿದ್ದಂತೆ ಭಾಸವಾಗುತ್ತಿತ್ತು. ತಾನು ಓದಿದ್ದ ಕೇಳಿದ್ದ ಕಥೆ ಪುರಾಣಗಳು , ನೀತಿ ನಿಯಮಗಳೆಲ್ಲವೂ ಗಾಳಿಯಲ್ಲಿ ತೂರಿಹೋದಂತೆ ಅನಿಸುತ್ತಿತ್ತು. ನನ್ನ ನಂಬಿಕೆಗಳು, ಉದ್ದೇಶಗಳು, ತತ್ವ ಸಿದ್ದಾಂತಗಳೆಲ್ಲಾ ನನಗೊಬ್ಬನಿಗೇ ಮೀಸಲಿರುವ ಚೌಕಟ್ಟೆನಿಸಿಬಿಟ್ಟಿತ್ತು. "ನಿನಗೆ ನಾನು ಹೇಳುವುದರಲ್ಲಿ ನಂಬಿಕೆ ಇಲ್ಲಾ ಅಂದರೆ ನೀನೇ ಸ್ವಲ್ಪ ಗಮನಿಸಿ ನೋಡು. ಪುರುಷ ಪ್ರಕೃತಿಯನ್ನು ಸೇರುವುದು ಸಹಜ ಕ್ರಿಯೆ, ಈ ಮದುವೆ ಬಾಂಧವ್ಯ ಎಲ್ಲಾ ಮನುಷ್ಯ ಮಾಡ್ಕೊಂಡಿರುವ ಕಟ್ಟುಪಾಡುಗಳು. ಇರುವ ಯೌವ್ವನದ ಸಾರ ಸವಿಯೋದು ಬಿಟ್ಟು ಈ ಹಳೇ ತತ್ವ ಸಿದ್ದಾಂತಗಳನ್ನ ಇಟ್ಟುಕೊಂಡು ಏನು ಮಾಡ್ತೀಯಾ?? ಯೋಚನೆ ಮಾಡಿ ನೋಡು" ಅಂತ ಹೇಳಿ ಮನೆಗೆ ನಿರ್ಗಮಿಸಿದ್ದ ನಾಗರಾಜ.
ಯಾಕೋ ನಾಗರಾಜನ ಮಾತುಗಳು ಸ್ವಲ್ಪ ಘಾಡವಾದ ಪರಿಣಾಮ ಬೀರಿದ್ದವು ಲಕ್ಷ್ಮೀನಾರಾಯಣನ ಮೇಲೆ. ಅವನು ಬಲವಂತವಾಗಿ ಕಟ್ಟಿಟ್ಟಿದ್ದ ವಯೋಸಹಜವಾದ ಮನೋಕಾಮನೆಗಳು ಗರಿಗೆದರಿ ನಾಗರಾಜನ ಮಾತಿಗೆ ಹೌದೌದು ಎನ್ನುತ್ತಿದ್ದವು.
ಸ ಶೇ ಷ
ಪ್ರಿಯಾಂಕ್ ರಾವ್